ಅಪರೂಪ. ಅನ್ಯೂನ್ಯ, ಅತಿವಿರಳ, ಆನಂದ ಇವುಗಳಿಂದ ಕೂಡಿದ ತಮ್ಮ ಜೀವನದ ಶೋಭೆಯನ್ನು ಹೆಚ್ಚಿಸಿಕೊಂಡಿರುವ ಶೋಭಾ-ಜೀವನ್ ಮದನೆ ಇವರ ಈ 'ಅನುದಿನ ಅನುಕ್ಷಣ' ತುಂಬಾ ಚೆನ್ನಾಗಿ ಮೂಡಿಬಂದಿದೆ. ಮಾತು ಮಾತಿಗೂ ನಾನು ಹೆಚ್ಚು, ತಾನು ಹೆಚ್ಚು ಎಂದು ಹೇಳಿಕೊಂಡು ವೈಮನಸ್ಯವನ್ನು ತರಿಸಿಕೊಳ್ಳುತ್ತಾ, ತಮ್ಮ ಇಡೀ ಜೀವನವನ್ನು ಹಾಳುಮಾಡಿಕೊಳ್ಳುವ ಈಗಿನ ಜೋಡಿಗಳು, ತಮ್ಮ ಜೀವನದ ಸಾರ್ಥಕತೆಗೆ, ಹಣಕ್ಕಿಂತ ಗುಣಕ್ಕೆ ಪ್ರಾಧಾನ್ಯತೆಯನ್ನು ಕೊಡಬೇಕೆಂಬುದನ್ನು ತಿಳಿಯಲು, ಶೋಭಾ-ಜೀವನ್ ಮದನೆಯವರ ಈ 'ಅನುದಿನ ಅನುಕ್ಷಣ' ಸಹಾಯ ಮಾಡುತ್ತದೆ. ಶೋಭಾರವರ ಸುಂದರ ಹಸನ್ಮುಖ ಕಣ್ಣಿಗೆ ಕಟ್ಟಿದಂತಿದೆ. ಅವರ ಸಹೃದಯತೆ ಎಲ್ಲರ ಮನಸ್ಸಿನಲ್ಲೂ ಸದಾ ನೆನಪಿನಲ್ಲಿರುತ್ತದೆ.
ಎಸ್. ಆರ್. ಅರುಣಾ
ನಿವೃತ್ತ ಪ್ರಾಂಶುಪಾಲರು
ಮಹಾರಾಣಿ ವಿಜ್ಞಾನ ಕಾಲೇಜು,
ಬೆಂಗಳೂರು
ಅಪರೂಪ. ಅನ್ಯೂನ್ಯ, ಅತಿವಿರಳ, ಆನಂದ ಇವುಗಳಿಂದ ಕೂಡಿದ ತಮ್ಮ ಜೀವನದ ಶೋಭೆಯನ್ನು ಹೆಚ್ಚಿಸಿಕೊಂಡಿರುವ ಶೋಭಾ-ಜೀವನ್ ಮದನೆ ಇವರ ಈ 'ಅನುದಿನ ಅನುಕ್ಷಣ' ತುಂಬಾ ಚೆನ್ನಾಗಿ ಮೂಡಿಬಂದಿದೆ. ಮಾತು ಮಾತಿಗೂ ನಾನು ಹೆಚ್ಚು, ತಾನು ಹೆಚ್ಚು ಎಂದು ಹೇಳಿಕೊಂಡು ವೈಮನಸ್ಯವನ್ನು ತರಿಸಿಕೊಳ್ಳುತ್ತಾ, ತಮ್ಮ ಇಡೀ ಜೀವನವನ್ನು ಹಾಳುಮಾಡಿಕೊಳ್ಳುವ ಈಗಿನ ಜೋಡಿಗಳು, ತಮ್ಮ ಜೀವನದ ಸಾರ್ಥಕತೆಗೆ, ಹಣಕ್ಕಿಂತ ಗುಣಕ್ಕೆ ಪ್ರಾಧಾನ್ಯತೆಯನ್ನು ಕೊಡಬೇಕೆಂಬುದನ್ನು ತಿಳಿಯಲು, ಶೋಭಾ-ಜೀವನ್ ಮದನೆಯವರ ಈ 'ಅನುದಿನ ಅನುಕ್ಷಣ' ಸಹಾಯ ಮಾಡುತ್ತದೆ. ಶೋಭಾರವರ ಸುಂದರ ಹಸನ್ಮುಖ ಕಣ್ಣಿಗೆ ಕಟ್ಟಿದಂತಿದೆ. ಅವರ ಸಹೃದಯತೆ ಎಲ್ಲರ ಮನಸ್ಸಿನಲ್ಲೂ ಸದಾ ನೆನಪಿನಲ್ಲಿರುತ್ತದೆ.
ಎಸ್. ಆರ್. ಅರುಣಾ
ನಿವೃತ್ತ ಪ್ರಾಂಶುಪಾಲರು
ಮಹಾರಾಣಿ ವಿಜ್ಞಾನ ಕಾಲೇಜು,
ಬೆಂಗಳೂರು