ತಾವು ಜೀವಿಸುವ ಪರಿಸರದೊಂದಿಗೆ ಜೀವಂತವಾಗಿ ಮಿಡಿಯುವ ಸೃಜನಶೀಲ ಮನಸ್ಸಿನ ಜಾತ್ಯತೀತ ಪ್ರಜ್ಞೆಯ ಯುವಕ ತಲೆಮಾರೊಂದನ್ನು ತಮ್ಮ ಬರೆಹ ಮತ್ತು ವ್ಯಕ್ತಿತ್ವದಿಂದ ರೂಪುಗೊಳ್ಳುವಂತೆ ತೇಜಸ್ವಿ ಯವರು ಮಾಡಿದರು ಎನ್ನುವುದು ದೊಡ್ಡ ಸಂಗತಿಯಾಗಿದೆ. ನಾಡು ಕಂಡ ಅಪೂರ್ವ ಲೇಖಕ ಮತ್ತು ವಿಶಿಷ್ಟ ವ್ಯಕ್ತಿ ತೇಜಸ್ವಿ. ಅವರ ಅಚಾನಕ್ ಸಾವಿನಿಂದ ಕವಿದಿರುವ ದುಗುಡ ಮತ್ತು ಅವರ ಮೇಲಿನ ಅಭಿಮಾನಗಳು ಇನ್ನೂ ಆದ್ರ್ರವಾಗಿರುವಾಗಲೇ, ಅವರನ್ನು ಕುರಿತು ಅವರಿಂದ ಲೋಕದೃಷ್ಟಿಯನ್ನು ಕಟ್ಟಿಕೊಂಡಿರುವ ಯುವಕರೊಬ್ಬರು ಬರೆದಿರುವ ಈ ಪುಸ್ತಕ ಓದಿ ನನಗಂತೂ ಸಂತೋಷವಾಗಿದೆ. ಲೇಖಕರೊಬ್ಬರ ಮೊದಲ ಬರೆಹವೇ ಇದು ಎಂದು ಅಚ್ಚರಿಪಡುವಷ್ಟು ಇಲ್ಲಿ ಪ್ರಬುದ್ಧತೆಯಿದೆ: ಜೀವಂತಿಕೆಯಿದೆ; ಬರೆಹದ ಮೇಲೆ ಹಿಡಿತವಿದೆ. ಈ ಕೃತಿಯನ್ನು ಓದುಗರು ನನ್ನಂತೆಯೇ ಓದಿ ಸಂತೋಷ ಪಡುವರು ಎಂಬ ನಂಬಿಕೆ ನನಗಿದೆ. - ರಹಮತ್ ತರೀಕೆರೆ
ತಾವು ಜೀವಿಸುವ ಪರಿಸರದೊಂದಿಗೆ ಜೀವಂತವಾಗಿ ಮಿಡಿಯುವ ಸೃಜನಶೀಲ ಮನಸ್ಸಿನ ಜಾತ್ಯತೀತ ಪ್ರಜ್ಞೆಯ ಯುವಕ ತಲೆಮಾರೊಂದನ್ನು ತಮ್ಮ ಬರೆಹ ಮತ್ತು ವ್ಯಕ್ತಿತ್ವದಿಂದ ರೂಪುಗೊಳ್ಳುವಂತೆ ತೇಜಸ್ವಿ ಯವರು ಮಾಡಿದರು ಎನ್ನುವುದು ದೊಡ್ಡ ಸಂಗತಿಯಾಗಿದೆ. ನಾಡು ಕಂಡ ಅಪೂರ್ವ ಲೇಖಕ ಮತ್ತು ವಿಶಿಷ್ಟ ವ್ಯಕ್ತಿ ತೇಜಸ್ವಿ. ಅವರ ಅಚಾನಕ್ ಸಾವಿನಿಂದ ಕವಿದಿರುವ ದುಗುಡ ಮತ್ತು ಅವರ ಮೇಲಿನ ಅಭಿಮಾನಗಳು ಇನ್ನೂ ಆದ್ರ್ರವಾಗಿರುವಾಗಲೇ, ಅವರನ್ನು ಕುರಿತು ಅವರಿಂದ ಲೋಕದೃಷ್ಟಿಯನ್ನು ಕಟ್ಟಿಕೊಂಡಿರುವ ಯುವಕರೊಬ್ಬರು ಬರೆದಿರುವ ಈ ಪುಸ್ತಕ ಓದಿ ನನಗಂತೂ ಸಂತೋಷವಾಗಿದೆ. ಲೇಖಕರೊಬ್ಬರ ಮೊದಲ ಬರೆಹವೇ ಇದು ಎಂದು ಅಚ್ಚರಿಪಡುವಷ್ಟು ಇಲ್ಲಿ ಪ್ರಬುದ್ಧತೆಯಿದೆ: ಜೀವಂತಿಕೆಯಿದೆ; ಬರೆಹದ ಮೇಲೆ ಹಿಡಿತವಿದೆ. ಈ ಕೃತಿಯನ್ನು ಓದುಗರು ನನ್ನಂತೆಯೇ ಓದಿ ಸಂತೋಷ ಪಡುವರು ಎಂಬ ನಂಬಿಕೆ ನನಗಿದೆ. - ರಹಮತ್ ತರೀಕೆರೆ